Saturday, March 10, 2012


                 ರಸಋಷಿಗೆ ನಮನ !    
 
ಕುವೆ೦ಪು ಅವರ "ಮಲೆನಾಡಿನ ಚಿತ್ರಗಳು" ಪುಸ್ತಕ ಓದಿದಂದಿನಿಂದ ನಾನು ಅವರ ಫ್ಯಾನ್ :)
ಮಲೆಗಳಲ್ಲಿ ಮದುಮಗಳು  ಕಾದಂಬರಿಯನ್ನು ಮತ್ತೊಮ್ಮೆ ಓದುವ ಆಸೆ ಬಹಳ ಕಾಡ್ತಾ ಇತ್ತು.. ಇವತ್ತು ಶುರು ಮಾಡಿದೀನಿ ಮತ್ತೊಂದ್ ಸಾರ್ತಿ ಓದಕೆ.. ಮೊದಲನೇ ಪುಟದಲ್ಲಿ ಓದುಗರಿಗೆ ಕೊಟ್ಟಿರುವ ಈ ಸಂದೇಶ, ಎಂಥ ಅರ್ಥಪೂರ್ಣ! ಮಲೆನಾಡಿನ ಬದುಕನ್ನು ಬಿ೦ಬಿಸುವ ಈ ಪುಟ್ಟ ಕವನವನ್ನ ಹಂಚಿಕೊಳ್ಳೋ ಆಸೆ ಆಯ್ತು.. ಓದಿ, ಆನ೦ದಿಸಿ ;)

ಇಲ್ಲಿ
        ಯಾರೂ ಮುಖ್ಯರಲ್ಲ;
                ಯಾರೂ ಅಮುಖ್ಯರಲ್ಲ;
                        ಯಾವುದೂ ಯಃಕಶ್ಚಿತವಲ್ಲ!

ಇಲ್ಲಿ
        ಯಾವುದಕ್ಕೂ ಮೊದಲಿಲ್ಲ;
                ಯಾವುದಕ್ಕೂ ತುದಿಯಿಲ್ಲ;
                        ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
                                ಕೊನೆಮುಟ್ಟುವುದೂ ಇಲ್ಲ !


ಇಲ್ಲಿ
        ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ
        ಎಲ್ಲಕ್ಕೂ ಇದೆ ಅರ್ಥ;
                ಯವುದೂ ಇಲ್ಲ ವ್ಯರ್ಥ;
                        ನೀರೆಲ್ಲವೂ ತೀರ್ಥ !!

2 comments:

  1. Nimma mange ivattu belagge bandaaga, odidde.. Istaa aytu!

    ReplyDelete
  2. :) 100 sala Odidroo bEsara AgdE irO kAdambri!! :)

    ReplyDelete