Friday, October 26, 2012

ಗತ ವೈಭವದ ಹುಡುಕಾಟದಲ್ಲಿ..

ವಿಶಾಲ ಇತಿಹಾಸವನ್ನು ಹೊಂದಿದ  ನಾಡು ನಮ್ಮದು.
ಇದರ ಕುರುಹು ಎಂಬಂತೆ ಸಹಸ್ರಾರು ಸ್ಮಾರಕಗಳನ್ನು ಕಾಣ ಸಿಗುತ್ತೇವೆ .
ಕೆಲವಾರು ಇಂದಿಗೂ ಅಚ್ಚಳಿಯದಂತೆ ಉಳಿದು ಗತ ವೈಭವವನ್ನು ಸಾರುತ್ತಿವೆ!
ಹಲವಾರು , ಹತ್ತಾರು ಕಾರಣಗಳಿಂದಾಗಿ ಹಾಳು  ಬಿದ್ದಿವೆ .

ಪಾಳು ಬಿದ್ದ ಆ ಗುಡಿ ಗೋಪುರಗಳೇ, ಈ ಬರಹಕ್ಕೆ ಸ್ಪೂರ್ತಿ!
ಇತಿಹಾಸದ ಪುಟದಲ್ಲಿ ಕಳೆದು ಹೋದ ದಾರಿಯಲ್ಲಿ ಹಿಂದೆ ಹೋದಾಗ, ನಾವೇ ರಾಜರಾಗುತ್ತೇವೆ.
ಅಳಿದ ಆ ದಿನಗಳ ವೈಭವವನ್ನು ನೆನೆದು, ಖುಷಿ-ಹೆಮ್ಮೆಯಿಂದ ಬೀಗುತ್ತೇವೆ ..
ಇಂದಿನ ಸ್ಥಿತಿಯನ್ನು ನೋಡಿ ಕೊರಗುತ್ತೇವೆ.


vijaya vittala temple,Hampi

ಮಾಯೆಯ ಮುನಿಸು ,ಕೈಗೆಟುಕದ ಕನಸು , ಭದ್ರ ಬುನಾದಿಯಿರದ ಮಹಾದ್ವಾಕಾಂಕ್ಷೆಗಳು .
ಯಾರ ಆಸೆಗೋ ಯಾವ ದ್ವೇಷಕ್ಕೋ  ಬಲಿಯಾದ  ಸಾಮ್ರಾಜ್ಯಗಳು ..
ಕಾಲ ಚಕ್ರಕ್ಕೆ  ಸಿಕ್ಕು ನಲುಗಿದ ಗುಡಿ-ಗೋಪುರಗಳು...

Mirjaana Fort

Ruins of Kanoor fort


Shettihally Church
ಪೂಜೆಯಿಲ್ಲದೆ ಕಂಬನಿಗರೆವ ಭಗ್ನ ಮೂರ್ತಿಗಳು.
ಅಸಂಖ್ಯ ರಹಸ್ಯಗಳನ್ನು ಒಡಲಲ್ಲಿ ಹುದುಗಿಟ್ಟ ಶಾಸನಗಳು ..
ಬಾವಲಿಗಳ ಕೂಗಿಗೆ ಕರಗುವ ಕತ್ತಲ ಕೋಣೆಗಳು ...

Ruins in qutub minar complex


A statue in Belur Chennakeshava Temple

ನಮ್ಮ ತವರಿನ ಕಲೆ,ಪರಂಪರೆ , ವೈಭವವನ್ನು  ಸಾರಿ ಹೇಳುವ ಈ 'ಪಳೆಯುಳಿಕೆಗಳು' ನಮ್ಮ ಹೆಮ್ಮೆ!
ಅಂದಿನ ಕಲಾ ಕುಶಲತೆ , ಸಾಹಸಗಾಥೆ, ಅದಮ್ಯ ಚೇತನ ಹೊಸ ಸಮಾಜದ ಅನ್ವೇಷಣೆಯಲ್ಲಿ  ತೊಡಗಿರುವ   ನಮಗೆ ಸ್ಪೂರ್ತಿ ! ಸಾಮ್ರಾಜ್ಯಗಳ ಅಳಿವು - ಉಳಿವಿನ ಯಶೋಗಾಥೆ, ಇಂದು ನಮಗೆ ಪಾಠ !
ಉಳಿದಿರುವ ಇಷ್ಟನ್ನು ನೋಡಿ ,ಗೌರವಿಸಿ,ಉಳಿಸುವುದು ನಮ್ಮ ಹಕ್ಕು,ಕರ್ತವ್ಯ ! ಅಲ್ಲವೇ?