Sunday, November 17, 2013

ನಿಧಾನಿಸು ..ನಿಧಾನಿಸು !

ಹಾವಿನ ಹಬ್ಬದಿಂದ ಗೋವಿನ ಹಬ್ಬದವರೆಗೂ ಎಲ್ಲ ಹಬ್ಬಗಳೂ ಮುಗಿದಿದೆ .

ನಿರಂತರವಾಗಿ ಭೋರ್ಗರೆದ ಮಳೆ ಕೊನೆಗೂ ತಣ್ಣಗಾಗಿ ಚಳಿಗೆ ಸ್ವಾಗತ ಕೋರಿದೆ .

ಮುಸ್ಸಂಜೆಗೇ ಬೆಳಕು ಮಾಯವಾಗಿ ಮಸೀಮಯ ಕತ್ತಲು ಎಲ್ಲೆಡೆ ತುಂಬುತ್ತಿದೆ .

ಕಾರ್ತೀಕದ ದೀಪಗಳ  ಸಾಲು ನಿಶೆಯಲ್ಲಿ ರಾರಾಜಿಸುತ್ತಿದೆ .

ಅಂಗಳದಲ್ಲಿ ಅಡಿಕೆ ಕೊನೆಗಳು ರಾಶಿ-ರಾಶಿಯಾಗಿ ಬಿದ್ದಿವೆ . 
 

ತಣ್ಣನೆ ಮೈಕೊರೆಯುವ ಗಾಳಿ ಲಾಲಿ ಹಾಡಿದೆ .

ಮುಂಜಾನೆಯ ಕೋಲು ಬಿಸಿಲು ಕಾವಣದ ಕಡಲಿನ್ನು ತೂರಿ ಬಂದಿದೆ .

ಚಪ್ಪರದ ಕೆಳಗೆ ನೆರಳು-ಬೆಳಕುಗಳ ರಂಗೋಲಿ ಮೂಡಿದೆ .

ಬದಲಾಗುವ ಋತುಗಳು ನಮ್ಮ ಕೆಲಸವನ್ನು , ನಮ್ಮ ಜೀವನಶೈಲಿಯನ್ನು ಬದಲಾಯಿಸದಷ್ಟು ಮುಂದೆ ಬಂದಿದ್ದರೂ ,  ಪ್ರಕೃತಿಯ ಋತುಚಕ್ರ ಸಾರ್ವಕಾಲಿಕ ಸತ್ಯ !

ಜೀವನದ ಈ ಮಹಾಪ್ರವಾಹದಲ್ಲಿ ಅವಸರದಲ್ಲಿ ಮುನ್ನುಗ್ಗುತ್ತಿರುವ ವೇಗದಲ್ಲಿ ನಮ್ಮೊಂದಿಗೆ ಇರುವುದನ್ನು ಮರೆಯುತ್ತಿದ್ದೇವೆ .  ಇರುವಲ್ಲೇ ಮುಳುಗಿ-ತೇಲಿ ಹಾಯಾಗಿ ಸಾಗೋಣ . 
 
ನಿಧಾನಿಸೋಣ . ಸಾವಧಾನದ ಬೆನ್ನೇರೊಣ .
 
ಕೊನೆಗೆ ಸೇರುವ ಕಡಲೊಂದೇ ತಾನೇ ?